ಜಗಜ್ಯೋತಿ

ಜಗಜ್ಯೋತಿಯೇ ಯುಗ ಜ್ಯೋತಿಯೇ
ಮಹಾಂತ ಮಹಿಮನೆ ಬಸವಣ್ಣ || ಪ ||
ಏಕ ದೇವನನು ನಂಬಿದೆ ತೋರಿದೆ
ನೀನೇ ಇಂದಿಗು ಗತಿಯಣ್ಣ || ಅ.ಪ.||

ಒಂದೊಂದು ಜಾತಿಗೊಂದೊಂದು ದೈವ
ದೇವರು ಜಾತಿಗಳಗಣಿತವು
ಜಾತಿಯೊಂದೆ ಮನುಕುಲವು ದೈವವೂ
ಒಂದೇ ಸಾರಿದೆ ಸನ್ಮತವು || ೧ ||

ಒಬ್ಬನೇ ದೇವನು ಸರ್ವಕೆ ಒಡೆಯನು
ಇನ್ನೊಬ್ಬನಿಗೆಲ್ಲಿಯ ಜಾಗ
ಅನೇಕ ದೇವರ ಕಲ್ಪನೆ ಸಮಾಜ
ದನೈಕ್ಯ ಭೇದದ ರೋಗ || ೨ ||

ವಿಶ್ವವನ್ನು ತುಂಬಿರುವ ಲಿಂಗವನು
ಅಂಗದಲ್ಲಿ ಸಾಕಾರಗೊಳಿಸಿದೆ
ವಿಶ್ವ ಜೀವರಲಿ ವಿಶ್ವೇಶನ ಕಂಡೆ
ವಿಶ್ವಮಾನವನ ರೂಪುಗೊಳಿಸಿದೆ || ೩ ||

ಸಂಕೇತ ರೂಪ ಇಷ್ಟಲಿಂಗವದು
ಸಕಲವು ಅವನದೆ ರೂಪಗಳು
ಒಬ್ಬನೆ ಈಶ್ಚರ ಅವನೆ ಲಿಂಗ ಶಿವ
ಸಲ್ಲವು ಕಲ್ಪನೆ ರೂಪಗಳು || ೪ ||

ಪ್ರಾಣಲಿಂಗಕೆ ಕಾಯುವೆ ಸೆಜ್ಜೆ
ಅವಗೇಕೆ ಗುಡಿಯ ಗೊಡವೆ
ವಿಶ್ಚದ ಲಿಂಗಕೆ ಗಗನವೆ ದೇಗುಲ
ಅವಗೆಂಥ ಪೂಜೆ ಒಡವೆ || ೫ ||

ಮೂರ್ತಿ ಪೂಜೆಯಲಿ ಭವ್ಯ ಗುಡಿಗಳಲಿ
ಹಣದ ಸ್ವಾರ್ಥವುಂಟು
ದೇವರ ವ್ಯಾಪಾರಿಗಳನು ಖಂಡಿಸಿ
ತೋರಿದೆ ನೇರದ ನಂಟು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಂಡುಚಿ
Next post ನಡುನೀರಿನಲ್ಲಿ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys